
ಹುಬ್ಬಳ್ಳಿ: ದೇಶದಲ್ಲಿ ಭಯೋತ್ಪಾದನೆ ಶುರುವಾಗಲು ನೇರ ಕಾರಣ ಕಾಂಗ್ರೆಸ್. ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ತುಷ್ಟಿಕರಣ ಪರಾಕಾಷ್ಠೆ ತಲುಪಿದೆ. ಮೂಲಭೂತವಾದ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರೀತಿಯ ರಾಜ್ಯ ಸರ್ಕಾರ ನಡೆಗೆ ಹೈಕೋರ್ಟ್ ಕಪಾಳಮೋಕ್ಷ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ, ಗಲಭೆ ಪ್ರಕರಣ ಸೇರಿ 43 ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಸರ್ಕಾರ ರದ್ದು ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ತಡೆ ಹಿಡಿದಿದೆ ಎಂದರು. ದೇಶದ ಸುರಕ್ಷತೆ ವಿಚಾರದಲ್ಲಿ ತನ್ನ ನಿಲುವೇನು ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಲಿ. ಪಾಕಿಸ್ತಾನದ ವಕ್ತಾರರಂತೆ ಪ್ರತಿಯೊಂದು ದಾಳಿಯ ಸಾಕ್ಷಿ ಕೇಳುವ, ವಿಶೇಷ ಅಧಿವೇಶನಕ್ಕೆ ಒತ್ತಾಯಿಸುವ ಕೆಲಸ ಬಿಟ್ಟು, ದೇಶ ರಕ್ಷಣೆ ಬೆಂಬಲಿಸುವ ಕೆಲಸ ಮಾಡಲಿ ಎಂದು ಜೋಶಿ ಆಗ್ರಹಿಸಿದರು.
ಒಂದು ಕಡೆ ಗಲಭೆ ಕೇಸ್ ರದ್ದು ಮಾಡುತ್ತಾರೆ, ಇನ್ನೊಂದು ಕಡೆ ದ್ವೇಷ ಭಾಷಣ ಎಂದು ಹಿಂದೂ ಕಾರ್ಯಕರ್ತರು, ಬಿಜೆಪಿ ನಾಯಕರ ವಿರುದ್ಧ ಕೇಸ್ ಹಾಕುತ್ತಾರೆ, ಇದು ಯಾಕೆ ಎಂಬ ಸತ್ಯ ಜನರಿಗೆ ತಿಳಿದಿದೆ. ಕರ್ನಾಟಕ ಸರ್ಕಾರ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚುತ್ತಿರುವುದು ಖಂಡನೀಯ. ಬ್ಯಾಟರಿ ಬೆಳಕಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಸ್ಥಿತಿಯಲ್ಲಿಸರ್ಕಾರಿ ಆಸ್ಪತ್ರೆಗಳನ್ನು ಇರಿಸಿರುವುದಕ್ಕೆ ಸಿಎಂ-ಡಿಸಿಎಂಗೆ ನಾಚಿಕೆಯಾಗಬೇಕು ಎಂದರು.
ಪಿಕಪ್ ಚಾಲಕ ರಹೀಮ್ ಕೊ*ಲೆ ಪ್ರಕರಣ ಇಬ್ಬರು ಪರಿಚಯಸ್ಥರು ಸೇರಿ 15 ಮಂದಿ ವಿರುದ್ಧ FIR
ರಾಜೀವ್ ಗಾಂಧಿಯವರು ಕಾಲವಾದ ನಂತರದಲ್ಲಿ ಸೋನಿಯಾ ಗಾಂಧಿ ಕುಟುಂಬಕ್ಕೆ ಪ್ರಧಾನಿ ಪಟ್ಟವೇ ಅಲರ್ಜಿಯಾಗಿ ಗೋಚರಿಸುತ್ತಿದೆ. ಆ ಕುಟುಂಬ ಓಲೈಸುವ ಕಾಂಗ್ರೆಸ್ಸಿಗರೂ ಅದೇ ಮನೋಭಾವನೆ ಹೊಂದಿದ್ದಾರೆ. ದೇಶ ಆರ್ ಎಸ್ ಎಸ್ ನ ಪ್ರಯೋಗಶಾಲೆಯಾಗಿದೆ ಎಂದೆಲ್ಲ ಆರೋಪಿಸುತ್ತಾರೆ. ಕಾಂಗ್ರೆಸ್ನವರು ಒಪ್ಪಲಿ ಬಿಡಲಿ, ದೇಶದ ಜನತೆ ಆರ್ ಎಸ್ಎಸ್ -ಬಿಜೆಪಿ ತತ್ವ ಸಿದ್ದಾಂತ ಒಪ್ಪಿದ್ದಾರೆ. ಆರ್ ಎಸ್ ಎಸ್ ನಾವು ಸರ್ಕಾರದಲ್ಲಿದ್ದೇವೆ, ದೇಶ ರಕ್ಷಣೆ, ಹಿತಕ್ಕೆ ಧಕ್ಕೆ ಬಂದಾಗ ತಕ್ಕ ಉತ್ತರ ನೀಡಿದ್ದೇವೆ ಎಂದು ಜೋಶಿ ಹೇಳಿದರು.