
ಹೈದರಾಬಾದ್: ಖ್ಯಾತ ನಿರ್ದೇಶಕ ಎ.ಎಸ್ ರವಿಕುಮಾರ್ ಚೌಧರಿ (70) ವಿಧಿವಶರಾಗಿದ್ದಾರೆ.. ನಿನ್ನೆ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.. ಗೋಪಿಚಂದ್ ನಾಯಕನಾಗಿ ನಟಿಸಿದ್ದ ಯಜ್ಞಂ ಚಿತ್ರದ ಮೂಲಕ ರವಿಕುಮಾರ್ ನಿರ್ದೇಶಕರಾದರು. ಬಾಲಕೃಷ್ಣ ಜೊತೆ ವೀರಭದ್ರ, ನಿತಿನ್ ಜೊತೆ ಆಟಡಿಸ್ತಾ, ಸಾಯಿ ದುರ್ಗಾ ತೇಜ್ ಹೀರೋ. ಪಿಲ್ಲಾ ನುವ್ವು ಲೇನಿ ಜೀವಿತಂ, ಮತ್ತು ಗೋಪಿಚಂದ್ ಜೊತೆ ‘ಸೌಖ್ಯಂ’ ಚಿತ್ರಗಳನ್ನು ನಿರ್ಮಿಸಿದ್ದಾರೆ. ರವಿಕುಮಾರ್ ಕೊನೆಯದಾಗಿ ರಾಜ್ ತರುಣ್ ಜೊತೆ ತಿರಗಬಡರಾ ಸ್ವಾಮಿ ಸಿನಿಮಾ ಮಾಡಿದ್ದರು.
ರವಿಕುಮಾರ್ ಚೌಧರಿ ನಿಧನಕ್ಕೆ ತೆಲುಗು ನಿರ್ದೇಶಕರ ಸಂಘದ ಅಧ್ಯಕ್ಷ ವೀರ ಶಂಕರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರವಿಕುಮಾರ್ ಚೌಧರಿ ನಂದಮೂರಿ ಕುಟುಂಬದ ಕಟ್ಟಾ ಅಭಿಮಾನಿ ಆಗಿದ್ದಾರೆ.. ಇನ್ನು ರವಿಕುಮಾರ್ ಅವರಿಗೆ ಪತ್ನಿ, ಮಕ್ಕಳಿದ್ದರೂ, ಅವರು ಕಳೆದ ಕೆಲ ಸಮಯದಿಂದ ಒಬ್ಬರೇ ವಾಸಿಸುತ್ತಿದ್ದರು ಎನ್ನಲಾಗಿದೆ.