
ಬೆಂಗಳೂರು: ನಗರದ ಪೂರ್ಣ ಪ್ರಜ್ಞಾ ಲೇಔಟ್ನ ಓಯೊ ರೂಂನಲ್ಲಿ ವಿವಾಹಿತ ಮಹಿಳೆಯನ್ನು ಪ್ರತಿಯಕರ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.. ಟೆಕ್ಕಿ ಯಶಸ್(25) ಹರಿಣಿ (36) ಎಂಬ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಯಶಸ್ ಹಾಗೂ ಇಬ್ಬರು ಮಕ್ಕಳ ತಾಯಿ ಹರಿಣಿ ಇಬ್ಬರೂ ಕೆಂಗೇರಿ ನಿವಾಸಿಗಳಾಗಿದ್ದು, ಆರೋಪಿ ಯಶಸ್ ನಿನ್ನ ಜೊತೆ ಮಾತಾಡಬೇಕು ಬಾ ಎಂದು ಓಯೋ ರೂಂಗೆ ಕರೆದು ಚಾಕುವಿನಿಂದ ಇರಿದು ಕೊ*ಲೆ ಮಾಡಿದ್ದಾನೆ.
ಸದ್ಯ ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ. ಇನ್ನು ಮದುವೆಯಾಗಿದ್ದ ಹರಿಣಿಗೆ ಯಶಸ್ ಜಾತ್ರೆಯಲ್ಲಿ ಪರಿಚಿತನಾಗಿದ್ದ. ಹರಿಣಿ, ಯಶಸ್ ಸ್ನೇಹಿತನ ಸಂಬಂಧಿಯಾಗಿದ್ದರು. ಕೆಲ ತಿಂಗಳುಗಳಿಂದ ಹರಿಣಿ, ಯಶಸ್ ಮಧ್ಯೆ ಒಡನಾಟ ಹೆಚ್ಚಾಗಿತ್ತು. ಇದೇ ವಿಚಾರಕ್ಕೆ ಹರಿಣಿ ಹಾಗೂ ಯಶಸ್ ಮನೆಯಲ್ಲಿ ಗಲಾಟೆಯೂ ಆಗಿತ್ತು.
ಮನೆಯಲ್ಲಿ ಗಲಾಟೆಯಾದ ಮೇಲೆ ಹರಿಣಿಯು ಯಶಸ್ನಿಂದ ಅಂತರ ಕಾಯ್ದುಕೊಂಡಿದ್ದಳು. ಕಳೆದ ಶುಕ್ರವಾರ ಸಂಜೆ ಆರೋಪಿ ಯಶಸ್, ಪೂರ್ಣಪ್ರಜ್ಞ ಲೇಔಟ್ನ ಓಯೋ ರೂಂಗೆ ಹರಿಣಿಯನ್ನು ಕರೆದಿದ್ದ. ಹೋಟೆಲ್ಗೆ ಹರಿಣಿ ಭೇಟಿ ನೀಡಿದ್ದು, ನೀನು ನನಗೆ ಬೇಕು. ನಿನ್ನ ಬಿಟ್ಟು ಇರೋಕೆ ಆಗಲ್ಲ. ನನಗೆ ನೀನು ಸಿಗಲಿಲ್ಲ ಅಂದ್ರೆ ಇನ್ಯಾರಿಗೂ ಸಿಗಬಾರದು ಎಂದು ಚಾಕುವಿನಿಂದ ಇರಿದು ಹ*ತ್ಯೆ ಮಾಡಿದ್ದಾನೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಆರೋಪಿ ಸಾಫ್ಟ್ವೇರ್ ಇಂಜಿನಿಯರ್ ಯಶಸ್ ಅವರನ್ನು ಅರೆಸ್ಟ್ ಮಾಡಲಾಗಿದೆ.