
ಮುಂಬೈ: ಭಾರೀ ಮಳೆಗೆ ಮುಂಬೈನ ನೂತನ ಆಚಾರ್ಯ ಅತ್ರೆ ಚೌಕ್ ಅಂಡರ್ಗ್ರೌಂಡ್ ಮೆಟ್ರೋ ನಿಲ್ದಾಣದ ಆಕ್ವಾಲೈನ್- ಸಂಪೂರ್ಣ ಜಲಾವೃತವಾಗಿದೆ. ಇಂದು ಬೆಳಿಗ್ಗೆ ಆಚಾರ್ಯ ಆತ್ರೆ ಚೌಕ್ ನಿಲ್ದಾಣದಲ್ಲಿ ಭಾರೀ ಮಳೆಯ ನೀರು ನಿಂತಿದ್ದು, ಎಂಎಂಆರ್ಸಿಯು ಆಚಾರ್ಯ ಆತ್ರೆ ಚೌಕ್ ಮತ್ತು ವರ್ಲಿ ನಡುವಿನ ರೈಲು ಸೇವೆಗಳನ್ನು ಸ್ಥಗಿತಗೊಳಿಸಿತು.
ಡಾ. ಆನಿ ಬೆಸೆಂಟ್ ರಸ್ತೆಯ ಉದ್ದಕ್ಕೂ ನಿರ್ಮಾಣ ಹಂತದಲ್ಲಿರುವ ಪ್ರವೇಶ/ನಿರ್ಗಮನ ರಚನೆಯಲ್ಲಿ ಆರ್ಸಿಸಿ ನೀರು ತಡೆಗೋಡೆ ಕುಸಿದಿದ್ದು, ನೀರು ಸೋರಿಕೆಗೆ ಕಾರಣವಾಯಿತು ಎಂದು ಎಂಎಂಆರ್ಸಿ ತಿಳಿಸಿದೆ. ಮೇ 10ರಿಂದ ಕಾರ್ಯನಿರ್ವಹಿಸುತ್ತಿರುವ ಆಚಾರ್ಯ ಅತ್ರೆ ಚೌಕ್ ಅಂಡರ್ಗ್ರೌಂಡ್ ಮೆಟ್ರೋ ನಿಲ್ದಾಣದ ಆಕ್ವಾಲೈನ್ ಮಳೆ ನೀರಿನಿಂದ ತುಂಬಿದ್ದು, ಎಸ್ಕಲೇಟರ್, ಸ್ಟೆಪ್ ಮೂಲಕ ಮೆಟ್ರೋ ನಿಲ್ದಾಣದೊಳಗೆ ನೀರು ಹರಿದು ಬಂದಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಪ್ರಯಾಣಿಕರ ಸುರಕ್ಷತೆಯ ಸಲುವಾಗಿ ವರ್ಲಿ ಮತ್ತು ಆಚಾರ್ಯ ಅತ್ರೆ ಚೌಕ್ ನಡುವಿನ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂಎಂಆರ್ಸಿಎಲ್ ತಿಳಿಸಿದೆ. ಈ ಬಾರಿ ಮುಂಬೈ ನಗರಕ್ಕೆ ಅವಧಿಗೆ ಮುಂಚಿತವಾಗಿಯೇ ಮುಂಗಾರು ಪ್ರವೇಶಿಸಿದೆ. ಭಾರತೀಯ ಹವಾಮಾನ ಇಲಾಖೆ ಸೂಚಿಸಿದಂತೆ ಜೂನ್ 11ರಂದು ಮುಂಗಾರು ಅಪ್ಪಳಿಸಬೇಕಿತ್ತು. ಆದ್ರೆ 16 ದಿನ ಮುಂಚಿತವಾಗಿಯೇ ಮಳೆ ಆರ್ಭಟಿಸಿದೆ. ಇದು ಕಳೆದ 75 ವರ್ಷಗಳಲ್ಲೇ ಅವಧಿಪೂರ್ವ ಮುಂಗಾರು ಪ್ರವೇಶಿಸಿದೆ.