ಕರ್ನಾಟಕಜೀವನ ಶೈಲಿದೇಶಬೆಂಗಳೂರುಸಿನಿಮಾಸುದ್ದಿ

ಮೈಸೂರ್‌ ಸ್ಯಾಂಡಲ್‌ ಸೋಪ್‌ಗೆ ತಮನ್ನಾ ರಾಯಭಾರಿ; ಎಂ.ಬಿ ಪಾಟೀಲ್‌ ಮಾಹಿತಿ

KSDLಗೆ ಬಹುಭಾಷ ನಟಿ ತಮ್ಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿದ್ದು. ಇದಕ್ಕೆ ಕೆಲ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಇದರ ನಡುವೆ ಕೈಗಾರಿಕ ಸಚಿವ ಎಂಬಿ ಪಾಟೀಲ್​ ಇದನ್ನು ಸಮರ್ಥಿಸಿಕೊಂಡಿದ್ದು. ತಮ್ಮನ್ನಾಗೆ 2.5 ಮಿಲಿಯನ್​ ಫಾಲೋವರ್ಸ್​ ಇದ್ದಾರೆ. ಅದಕ್ಕೆ ಅವರನ್ನು ರಾಯಭಾರಿಯಾಗಿ ನೇಮಿಸಿದ್ದೇವೆ. ಈ ಮೂಲಕ ಮೈಸೂರು ಸ್ಯಾಂಡಲ್​ನ್ನು ಅಂತರ್​ರಾಷ್ಟ್ರೀಯ ಬ್ರ್ಯಾಂಡ್​ ಆಗಿ ಬೆಳೆಸುತ್ತೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಮೈಸೂರು ಸ್ಯಾಂಡಲ್ ಸೋಪ್ ಕನ್ನಡಿಗರ ಹೆಮ್ಮೆ. ವಿಶ್ವೇಶ್ವರಯ್ಯ, ಮೈಸೂರು ಮಹರಾಜರು ಸ್ಥಾಪನೆ ಮಾಡಿದ್ರು ಬಿಜೆಪಿ ಸರ್ಕಾರ ಇದ್ದಾಗ ಇಲ್ಲಿ ಸಾಕಷ್ಟು ಅವ್ಯವಹಾರ ಆಗಿತ್ತು. ಈ ಸಂಸ್ಥೆ ಅಧ್ಯಕ್ಷರು ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ ನಾನು ಬಂದ ಮೇಲೆ ಸಾಕಷ್ಟು ಬದಲಾವಣೆ ಮಾಡಿದ್ದೇವೆ. ಮೂರು ಶಿಫ್ಟ್ ನಲ್ಲಿ ಈಗ ಕೆಲಸ ನಡೆಯುತ್ತಿದೆ. ಸಾಕಷ್ಟು ಸುಧಾರಣೆ ತಂದಿದ್ದೇವೆ. ಈ ಮೂಲಕ 40% ಪ್ರೊಡಕ್ಷನ್ ಹೆಚ್ಚಾಗಿದೆ.

ಈ ವರ್ಷ ಸುಮಾರು 1788 ಕೋಟಿ ವ್ಯವಹಾರ ಮಾಡಲಾಗಿದೆ. 415 ಕೋಟಿ ರೂಪಾಯಿ ನಿವ್ವಳ ಲಾಭ ಮಾಡಿದ್ದೇವೆ, ಯಾವುದೇ ಹೊಸ ಮಿಷನ್ ಹಾಕಿಲ್ಲ, ಲೇಬರ್ ಕೂಡ ಹೆಚ್ಚು ಮಾಡಿಲ್ಲ. ಆದರೆ ಸುಧಾರಣೆ ಮಾಡಿ ಲಾಭ ಮಾಡಿದ್ದೇವೆ. ಕನ್ನಡ ಬಗ್ಗೆ ನಾನು ಸಾಕಷ್ಟು ಅಭಿಮಾನ ಇಟ್ಟವನು. ವಚನ ಸಾಹಿತ್ಯದ ನಾಡಿನಿಂದ ಬಂದವರು. ಆದರೆ ನಮ್ಮ ಬ್ರ್ಯಾಂಡನ್ನು ಪ್ಯಾನ್ ಇಂಡಿಯಾ ಜೊತೆಗೆ ವಿದೇಶಕ್ಕೆ ಹೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಈ ರೀತಿ ಸ್ರ್ಯಾಟಜಿ ಮಾಡಿದ್ದೇವೆ ಎಂದು ಹೇಳಿದರು.

ಇನ್ನು KSDLನಲ್ಲಿ ಉತ್ಪಾದನೆ ಮಾಡುವ ಉತ್ಪನ್ನಗಳಲ್ಲಿ 18ರಷ್ಟು ಮಾತ್ರ ನಮ್ಮ ರಾಜ್ಯದಲ್ಲಿ ಮಾರಾಟವಾಗುತ್ತೆ. ಉಳಿದ 82ರಷ್ಟು ಉತ್ಪನ್ನಗಳು ಬೇರೆ ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ. ತಮ್ಮನ್ನ ಭಾಟಿಯಾಗೆ ಸುಮಾರು 2.5 ಮಿಲಿಯನ್​ ಜನ ಫಾಲೋವರ್ಸ್​ ಇದ್ದಾರೆ. ಹೀಗಾಗಿ ಅವರನ್ನು ರಾಯಭಾರಿಯಾಗಿ ಮಾಡಿದ್ದೇವೆ. ಈ ಮೂಲಕ ನಮ್ಮ ಬ್ರ್ಯಾಂಡ್​ ಅಂತರ್​ರಾಷ್ಟ್ರೀಯ ಮಟ್ಟಕ್ಕೆ ಬೆಳೆಸಬಹುದಾಗಿದೆ ಎಂದು ಹೇಳಿದರು. ಇನ್ನು KSDLನಲ್ಲಿ ಹೊಸ ಹೊಸ ಉತ್ಪಾದನೆ ಮಾಡಬೇಕು ಎಂದು ಹೇಳಿದ ಎಂಬಿ ಪಾಟೀಲ್​ ಸಂಸ್ಥೆಯಲ್ಲಿ ಸುಮಾರು 5 ಸಾವಿರ ಕೋಟಿ ವ್ಯವಹಾರ ಮಾಡಬೇಕಿದೆ. ಆಗಾಗಿ ಈ ನಿಟ್ಟಿನಲ್ಲಿ ಈ ಯೋಜನೆ ರೂಪಿಸಿದ್ದೇವೆ. ರಶ್ಮಿಕಾ ಮಂದಣ್ಣ ,ಶ್ರೀಲೀಲಾ, ಕಿಯಾರ ಅಡ್ವಾಣಿ, ಪೂಜಾ ಹೆಗ್ಡೆ ಈಗಾಗಲೇ ಬೇರೆ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು.

Lavanya

ಸಮ್ರಾಟ್‌ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ. ಸಿನಿಮಾ ಸುದ್ದಿಗಳ ಬಗ್ಗೆ ಅಪಾರ ಆಸಕ್ತಿ. ಪುಸ್ತಕ ಓದುವುದು, ಸಿನಿಮಾ ವೀಕ್ಷಣೆ, ಹಾಡು ಕೇಳುವುದು ನನ್ನ ಹವ್ಯಾಸಗಳು.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Please consider supporting us by disabling your ad blocker