
ಮೇಘಾಲಯ: ಮದುವೆಯಾಗಿ ಒಂದೇ ವಾರದಲ್ಲಿ ಮೇಘಾಲಯಕ್ಕೆ ಹನಿಮೂನ್ಗೆ ಹೋದ ನವದಂಪತಿಗಳು ನಾಪತ್ತೆಯಾಗಿದ್ದು ಕೆಲವು ದಿನಗಳ ಬಳಿಕ ಪತಿ ರಾಜ ರಘುವಂಶಿ ಮೃತದೇಹ ಪತ್ತೆಯಾಗಿತ್ತು ಆದರೆ ಪತ್ನಿ ಸೋನಮ್ ರಘುವಂಶಿ ಮಾತ್ರ ನಾಪತ್ತೆಯಾಗಿದ್ದರು ಅವರ ಹುಡುಕಾಟವನ್ನು ಪೊಲೀಸರು ನಡೆಸುತ್ತಿದ್ದು ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಪತಿಯ ಹತ್ಯೆಯಲ್ಲಿ ಪತ್ನಿಯ ಕೈವಾಡ ಇರುವುದು ಬೆಳಕಿಗೆ ಬಂದಿದ್ದು ಅದರಂತೆ ಪೊಲೀಸರು ನಾಪತ್ತೆಯಾಗಿದ್ದ ಪತ್ನಿ ಸೋನಮ್ ರಘುವಂಶಿಯನ್ನು ಉತ್ತರಪ್ರದೇಶದಲ್ಲಿ ಬಂಧಿಸಿದ್ದು ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಮೇಘಾಲಯ ಡಿಜಿಪಿ ಮಾಹಿತಿ ನೀಡಿದ್ದಾರೆ.
ಮಧ್ಯಪ್ರದೇಶದಿಂದ 4 ಮಂದಿ ಹಂತಕರು ಮೇಘಾಲಯಕ್ಕೆ ಬಂದು ಕೃತ್ಯ ನಡೆಸಲಾಗಿದೆ. ಈ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜಾ ರಘುವಂಶಿ ಮುಗಿಸಿ ಬಳಿಕ ಆರೋಪಿ ಸೋನಂ ನಾಪತ್ತೆಯಾಗಿದ್ದಳು. ಜೂನ್, 2 ರಂದು ಮೃತದೇಹ ಸಿಕ್ಕಿದ ಮೇಲೆ, ಪೊಲೀಸರಿಗೆ ಸೋನಂ ಮೇಲೆ ಅನುಮಾನ ಕಾಡಿತ್ತು. ಅಲ್ಲದೇ ಪ್ರವಾಸಿ ಗೈಡ್ಗಳ ವಿಚಾರಣೆಯಲ್ಲಿ ಈ ಜೋಡಿ ಮೂವರು ಪುರುಷರ ಜೊತೆ ಇರೋದಾಗಿ ತಿಳಿದುಬಂದಿತ್ತು.
ಮೇ 23ರಂದು ಹನಿಮೂನ್ಗೆಂದು ಮೇಘಾಲಯಕ್ಕೆ ಆಗಮಿಸಿದ್ದ ದಂಪತಿ, ಮಳೆಯಲ್ಲಿ ಸಮೃದ್ಧಿಯಾದ ಬೆಟ್ಟದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಚಿರಾಪುಂಜಿಗೆ ಬಂದಿದ್ದರು. ಈ ವೇಳೆ ಇಬ್ಬರೂ ನಾಪತ್ತೆಯಾಗಿದ್ದರು. ಈ ಸಂಬಂಧ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಆಳವಾದ ಕಂದಕದಲ್ಲಿ ಮೃತದೇಹವೊಂದು ಸಿಕ್ಕಿದ್ದು, ಕೈಯಲ್ಲಿದ್ದ ಟ್ಯಾಟೂ ನೋಡಿ ಇದು ಮೃತ ರಘುವಂಶಿಯದ್ದೇ ಎಂದು ಪತ್ತೆ ಮಾಡಲಾಗಿತ್ತು.
ಹನಿಮೂನ್ಗೆ ಬಂದ ಜೋಡಿಗಳನ್ನು ಯಾರೂ ಅಪಹರಿಸಿದ್ದಲ್ಲ. ದುಷ್ಕರ್ಮಿಗಳೂ ಜೀವ ತೆಗೆದು ಬಿಸಾಡಿಲ್ಲ. ಬದಲಾಗಿ ರಾಜಾ ರಂಘುವಂಶಿಯ ಪತ್ನಿಯೇ ಮಾಡಿದ ಮಾಸ್ಟರ್ ಪ್ಲಾನ್ ಎಂದು ಗೊತ್ತಾಗಿದೆ. ಇದೀಗ ಮೇಘಾಲಯದ ಪೊಲೀಸರಿಗೆ ಪತ್ನಿ ಸೋನಂ ಶರಣಾಗಿದ್ದಾಳೆ. ಪತಿಯನ್ನು ತಾನೇ ಮುಗಿಸಿರೋದಾಗಿ ಆಕೆ ಹೇಳಿಕೊಂಡಿದ್ದಾಳೆ.